78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Sunday, December 4, 2011

ಮೆರವಣಿಗೆಯಲ್ಲಿ ವೈವಿಧ್ಯಮಯ ಕಲಾ ತಂಡಗಳು



ಕೊಪ್ಪಳ ಡಿ.  ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಡಿ. ೯ ರಂದು ಏರ್ಪಡಿಸಲಾಗಿರುವ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವೈವಿಧ್ಯಮಯ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ.
  ವೈವಿಧ್ಯಮಯ ಕಲಾ ತಂಡಗಳನ್ನೊಳಗೊಂಡ ಮೆರವಣಿಗೆ ಡಿ. ೯ ರಂದು ಬೆಳಿಗ್ಗೆ ೮-೩೦ ಗಂಟೆಗೆ ನಗರದ ಸಾಯಿಬಾಬ ಮಂದಿರದಿಂದ ಹೊರಟು ನಗರದ ಪ್ರಮುಖ ರಸ್ತೆಗಳ ಮೂಲಕ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ವೇದಿಕೆಯನ್ನು ತಲುಪಲಿದೆ.  ಮೆರವಣಿಗೆಯಲ್ಲಿ ಭಾಗವಹಿಸಲಿರುವ ಕಲಾ ತಂಡಗಳ ವಿವರ ಇಂತಿದೆ.  ಮೈಸೂರಿನ ಮಹಾದೇವ ಮತ್ತು ತಂಡದಿಂದ ನಂದಿಧ್ವಜ ಕುಣಿತ, ತುಮಕೂರಿನ ಎಚ್.ಎನ್. ಗಿರೀಶ್ ಹುಲಿಕಲ್ ಅವರಿಂದ ಸೋಮನಕುಣಿತ, ಮೇಲುಕೋಟೆಯ ಎನ್.ಆರ್. ರವೀಂದ್ರ ಅವರ ಪಟ ಕುಣಿತ, ಮಂಡ್ಯದ ಸಿದ್ದೇಗೌಡ ಮತ್ತು ತಂಡದಿಂದ ಗಾರುಡಿ ಬೊಂಬೆ ಕುಣಿತ, ನಂಜನಗೂಡಿನ ಸತೀಶ್ ಮತ್ತು ತಂಡದಿಂದ ಕಂಸಾಳೆ ನೃತ್ಯ, ಹೆಗ್ಗೋಡು ಶಿವಮೊಗ್ಗ ಜಿಲ್ಲೆ ವನಿತಾ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ, ಚಿಕ್ಕಮಗಳೂರಿನ ಫಣಿಯಮ್ಮ ತಂಡದಿಂದ ಮಹಿಳಾ ವೀರಗಾಸೆ, ಮಂಡ್ಯದ ದೇವರಾಜ ಮತ್ತು ತಂಡದಿಂದ ಪೂಜಾಕುಣಿತ, ಕೋಲಾರದ ಅನಿಲಕುಮಾರ ತಂಡದಿಂದ ಹುಲಿವೇಷ, ಬೆಳಗಾವಿ ಜಿಲ್ಲೆ ಬಸವೇಶ್ವರ ಜಗ್ಗಲಿಗೆ ಮೇಳ ತಂಡದಿಂದ ಜಗ್ಗಲಿಗೆ ಮೇಳ, ಬಾದಾಮಿಯ ಯಲ್ಲಪ್ಪ ಪೂಜಾರಿ ತಂಡದಿಂದ ಖಣಿವಾದನ, ಬಾಗಲಕೋಟೆ ಜಿಲ್ಲೆ ಜಮಖಂಡಿಯ ಶ್ರೀಶೈಲ ಪಟ್ಟಣಶೆಟ್ಟಿ ತಂಡದಿಂದ ಸರೋಳ ವಾದನ, ಬಾಗಲಕೋಟೆ ಜಿಲ್ಲೆ ಸೋಮಶೇಖರ ತಂಡದಿಂದ ವೀರಗಾಸೆ, ಯಸಹಳ್ಳಿಯ ನಾರಾಯಣ ಸೋನಾರ ತಂಡದಿಂದ ಕರಡಿ ಮಜಲು, ಮರಿಯಮ್ಮನಹಳ್ಳಿಯ ಮಂಜಮ್ಮ ತಂಡದಿಂದ ಜೋಗತಿ ಕುಣಿತ, ಬೆಳಗಾವಿ ಜಿಲ್ಲೆಯ ಬೆನ್ನೂರು ತಂಡದಿಂದ ಕೋಲಾಟ, ಕರ್ನಾಟಕ ಜನಪದ ಕಲಾ ಸಂಸ್ಥೆಯಿಂದ ದಟ್ಟಿ ಕುಣಿತ, ಶಿವಮೊಗ್ಗ ಜಿಲ್ಲೆ ಯಲ್ಲಪ್ಪ ಭಾವತ ತಂಡದಿಂದ ದೇವಿಪಾತ್ರ, ಮಹೇಶಪ್ಪ ತಂಡದಿಂದ ತಮಟೆ ಮೇಳ, ಬಳ್ಳಾರಿ ಜಿಲ್ಲೆ ಹೊಸಪೇಟೆ ತಂಡದಿಂದ ಸಾರೋಟು ಮೆರವಣಿಗೆ, ಕಂಪ್ಲಿ ತಂಡದಿಂದ ತಾಶರಂ ಡೋಲು, ಯಲಬುರ್ಗಾದ ರೇವಣಪ್ಪ ತಂಡದಿಂದ ಡೊಳ್ಳು ಕುಣಿತ, ತಾವರಗೇರಾದ ಅಜಮೀರ್ ತಂಡದಿಂದ ಮರಗಾಲು ಕುಣಿತ, ಕುಷ್ಟಗಿಯ ದೇವಪ್ಪ ಭಜಂತ್ರಿ ತಂಡದಿಂದ ಹಲಗೆ ಮೇಳ, ದೊಡ್ಡಬಸವೇಶ್ವರ ಖಣಿಮೇಳ ತಂಡದಿಂದ ಖಣಿ ಹಲಗೆ ಮೇಳ, ಆನೆಗೊಂದಿಯ ಜನನಿ ನೃತ್ಯ ತಂಡದಿಂದ ಕಂಸಾಳೆ ನೃತ್ಯ, ಗಂಗಾವತಿಯ ವೀರಣ್ಣ ನಾಗಲೇಕರ ತಂಡದಿಂದ ಸಮಾಳ ವಾದ್ಯ, ಕಿಶನ್ ಹನ್ಮಂತಪ್ಪ ತಂಡದಿಂದ ಬ್ಯಾಂಜಿಯೋ ಮೇಳ, ಬಿನ್ನಾಳದ ಮಾರುತಿ ಶಹನಾಯಿ ಹಲಗೇ ಮೇಳದಿಂದ ಹಲಗೆ ಮೇಳ, ಗಂಗಾವತಿಯ ವೀರಯ್ಯ ಸಂಶೀಮಠ ತಂಡದಿಂದ ವೀರಗಾಸೆ, ಗೊರ್ಲೆಕೊಪ್ಪದ ಶರಣಯ್ಯ ಜುಲ್ಪಿ ತಂಡದಿಂದ ಕರಡಿ ಮಜಲು, ಗಂಗಾವತಿಯ ಅನ್ನಪೂರ್ಣ ಸಿಂಗ್, ಗೀತಾ, ಸಂತೋಷಿ ಭಾಟಿಯಾ ತಂಡದಿಂದ ದಾಂಡಿಯಾ ನೃತ್ಯ, ಕೊನ್ನಾಪುರದ ಪದ್ಮಾವತಿ ಭಜನಾ ಮಂಡಳಿಯಿಂದ ಕೋಲಾಟ, ಕೇಸರಹಟ್ಟಿಯ ಸಿ. ಮಹಾಲಕ್ಷ್ಮಿ ಕಲಾತಂಡದಿಂದ ಲಂಬಾಣಿ ನೃತ್ಯ, ಗಂಗಾವತಿಯ ನ್ಯೂ ಆರ್. ಮ್ಯೂಜಿಕಲ್ ಸ್ಟೆಪ್ ತಂಡದಿಂದ ತಾಷಿಯರಂಡೋಲ್ ವಾದನ, ಕಲ್ಲಾಪುರದ ಹನುಮಂತ ಎತ್ತಿನ ಮನಿ ತಂಡದಿಂದ ಡೊಳ್ಳು ಕುಣಿತ, ಬೆಳಗಲಿಯ ಲಕ್ಕಪ್ಪ ಭಜಂತ್ರಿ ತಂಡದಿಂದ ಹಲಗೆ ವಾದನ, ಬಾಗಲಕೋಟೆಯ ಸದಪ್ಪ ಮೇತ್ರಿ ಅವರಿಂದ ಮೀನಿನ ಸೋಗು, ಜಮಖಂಡಿಯ ರುಕ್ಮವ್ವ ಅವರಿಂದ ಚೌಡಕಿ ಪದ, ಶಿರೂರಿನ ಸಿದ್ದಪ್ಪ ಅವರಿಂದ ಕೊಂಬು ಕಹಳೆ, ಕಟಗೇರಿಯ ರಾಮಾರೂಢ ಭಜನೆ ಮಂಡಳಿಯಿಂದ ಭಜನೆ ಹಾಗೂ ಕೊಪ್ಪಳದ ಬಸವರಾಜ ವಿಭೂತಿ, ಗಂಗಾವತಿಯ ಕಲ್ಯಾಣಂ ನಾಗರಾಜ, ತಾವರಗೇರಾದ ದುರ್ಗಾದೇವಿ ಬುಡಗ ಜಂಗಮ ಕಲಾ ಸಂಘ, ಸಿದ್ದಾಪುರದ ಸಣ್ಣ ಚಿನ್ನಪ್ಪ ವಿಭೂತಿ, ನಟರಾಜ ಕಲಾ ಸಂಘ, ಮಾರುತಿ ವಿಭೂತಿ ತಂಡಗಳಿಂದ ಹಗಲುವೇಷ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿ

No comments:

Post a Comment