78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Sunday, December 4, 2011

ಸಮರ್ಥ ಜವಾಬ್ದಾರಿ ನಿಭಾಯಿಸಿ, ಸಮ್ಮೇಳನ ಯಶಸ್ವಿಗೊಳಿಸಿ: ಪರಣ್ಣ



ಗಂಗಾವತಿ, ಡಿ.4: ನಗರದಲ್ಲಿ ನಡೆ ಯುವ 78ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತಿಗಳು, ಅತಿಥಿಗಳಿಗೆ ಉತ್ತಮ ಆತಿಥ್ಯ ನೀಡಿ, ಸಮರ್ಥ ಜವಾಬ್ದಾರಿ ನಿಭಾಯಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಶಾಸಕ ಪರಣ್ಣ ಮುನವಳ್ಳಿ ಕರೆ ನೀಡಿದರು.

ರವಿವಾರ ಸಮ್ಮೇಳನದ ಸ್ವಾಗತ ಕಾರ್ಯಾಲಯದಲ್ಲಿ ನಡೆದ ಸರ್ವ ಸಮಿತಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಸಾಹಿತಿಗಳು, ಗಣ್ಯರು ಆಗಮಿಸಲಿದ್ದು, ಜವಾಬ್ದಾರಿ ಹೊತ್ತಿರುವ ಸಮಿತಿ ಸದಸ್ಯರು ತಮ್ಮ ತಮ್ಮ ಕರ್ತವ್ಯವನ್ನು ವಿನಯದಿಂದ ಮತ್ತು ಸೌಜನ್ಯತೆಯಿಂದ ನಿಭಾಯಿಸಬೇಕು ಹಾಗೂ ಊಟ, ವಸತಿ, ಕುಡಿಯುವ ನೀರು ಸೇರಿದಂತೆ ಇತರ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.

ಸಂಸದ ಶಿವರಾಮೇಗೌಡ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ, ಎನ್. ಸೂರಿಬಾಬು, ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್, ಮಲ್ಲನಗೌಡ, ನೂತನಕುಮಾರ, ಎಸ್.ಬಿ.ಪಾಟೀಲ್, ದುರ್ಗಾ ದಾಸ್ ಬಂಡಾರ್ಕರ್, ಬಸವರಾಜ ಕೋಟಿ, ವಾರ್ತಾಧಿಕಾರಿ ಬಿ.ತುಕಾರಾಂ, ವೀರಭದ್ರಪ್ಪ ನಾಯಕ, ಸಿ.ಜಿ.ಜವಳಿ, ಕವಿತಾ ಗುರುಮೂರ್ತಿ, ರೇಣುಕಾ ಆವೂಲ್, ಬಸವರಾಜ ರಹಮತ್ ನಾಳ, ಅಮರಜ್ಯೋತಿ ದುರುಗಪ್ಪ, ದೊಡ್ಡಬಸಪ್ಪ ನೀರಲಕೇರಿ, ಅಮರೇಶ ಕುಳಗಿ, ಎಸ್.ಬಿ.ಗೊಂಡಬಾಳ, ಅರಳಿ ಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

No comments:

Post a Comment