78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲಾ ಹಾರ್ದಿಕ ಸುಸ್ವಾಗತ...... ಅಕ್ಷರ ಜಾತ್ರೆಗೆ ಬನ್ನಿ..... WELCOME TO GANGAVATHI ( KOPPAL DISTRICT) ಕೊಪ್ಪಳ ಜಿಲ್ಲೆಯ ಮಾಹಿತಿ,ಪ್ರವಾಸಿ ತಾಣಗಳ ವಿವರಗಳಿಗಾಗಿ kannadanet.com, kannadanet.blogspot.com ನೋಡಿ

Sunday, October 9, 2011

ಸಾಹಿತ್ಯ ಸಮ್ಮೇಳನ : ಸಮಿತಿಗಳ ಪುನಾರಚನೆ


ಗಂಗಾವತಿ :  ಸಾಹಿತ್ಯ ಸಮ್ಮೇಳನಕ್ಕಾಗಿ ರಚನೆಯಾಗಿರುವ ಹಲವಾರು ಸಮಿತಿಗಳನ್ನು  ಪುನಾರಚನೆ ಮಾಡಿ ಕನಕಗಿರಿ,ಕಾರಟಗಿಯ ಭಾಗದ ಆಸಕ್ತರನ್ನು ಒಳಗೊಂಡಂತೆ ಹೊಸ ಸಮಿತಿಗಳನ್ನು ರಚಿಸಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ. ಅವರು  ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಯಾವುದೇ ಗೊಂದಲಗಳಿಲ್ಲದೇ ಎಲ್ಲರೂ ಒಟ್ಟಾಗಿ ಕನ್ನಡ ಜಾತ್ರೆಯನ್ನು ಆದ್ದೂರಿಯಾಗಿ ನಡೆಸೋಣ ಎಂದರು.
 ಇದೇ ಸಂದರ್ಭದಲ್ಲಿ  ಶಾಸಕ ಶಿವರಾಜ ತಂಗಡಗಿ ಮಾತನಾಡಿ  ಎಲ್ಲರೂ ಒಂದಾಗಿ ಕನ್ನಡ ಜಾತ್ರೆಯನ್ನು ನಡೆಸೋಣ ಎಂದರು.  ಕಸಾಪ ಜಿಲ್ಲಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ, ಲಲಿತಾರಾಣಿ,ಸಿಂಗನಾಳ ವಿರುಪಾಕ್ಷಪ್ಪ, ಅಮರೇಶ ಕುಳಗಿ, ನಾಗರಾಜ ಬಿಲ್ಗಾರ, ನೆಕ್ಕಂಟಿ ಸೂರಿಬಾಬು , ಕನ್ನಾಳ ಪಂಪಾಪತಿ ,ಬಸವರಾಜ ಕೋಟೆ,ಎಸ್.ಬಿ.ಗೊಂಡಬಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು. 

No comments:

Post a Comment